Bangaloreans Lifestyle,ವಾರದ ಅಂತರದಲ್ಲಿ ನಡೆಯಲಿವೆ ಮಲ್ಲೇಶ್ವರ, ಬಸವನಗುಡಿ ಕಡಲೆಕಾಯಿ ಪರಿಷೆ: ದಿನಾಂಕ ಯಾವುದು? ಗಮನಿಸಬೇಕಾದ ಅಂಶವೇನು? – within a week malleshwaram and basavanagudi kadelekayi parishe to be happen in bangalore between 8- 21 nov 2025

Date:

- Advertisement -


ಪ್ರತಿ ವರ್ಷದಂತೆ, ಬೆಂಗಳೂರಿನಲ್ಲಿ ಈ ಬಾರಿಯೂ ಎರಡು ಕಡಲೆಕಾಯಿ ಪರಿಷೆಗಳು ಒಂದರ ಹಿಂದೊಂದರಂತೆ ನಡೆಯಲಿವೆ. ಮೊದಲನೆಯದಾಗಿ, ನ. 8ರಿಂದ 10ರವರೆಗೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನಡೆದರೆ, ನ. 17ರಿಂದ 21ರವರೆಗೆ ಐತಿಹಾಸಿಕವಾದ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯಲಿದೆ. ಇವುಗಳಲ್ಲಿ ಯಾವ ಪರಿಷೆ ಇದೇ ಮೊದಲ ಬಾರಿಗೆ 5 ದಿನಗಳವರೆಗೆ ನಡೆಯಲಿದೆ, ಈ ಬಾರಿಯ ಕಡಲೆ ಪರಿಷೆಗಳಿಗಾಗಿ ಸರ್ಕಾರ ನೀಡಿರುವ ವಿಶೇಷವಾದ ಮಾರ್ಗಸೂಚಿಯೊಂದಿದ್ದು ಅದು ಏನು ಎಂಬುದರ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ಇದೇ ನವೆಂಬರ್ ನಲ್ಲಿ ನಡೆಯಲಿವೆ ಎರಡು ಕಡಲೆಕಾಯಿ ಪರಿಷೆ.
  • ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನ. 7-10ರವರೆಗೆ; ಬಸವನಗುಡಿ ಪರಿಷೆ 17ರಿಂದ 21ರವರೆಗೆ.
  • ಇಲ್ಲಿ ಸರ್ಕಾರದ ವಿಶೇಷ ಮಾರ್ಗಸೂಚಿಯೊಂದಿದ್ದು ಪರಿಷೆಗೆ ಹೋಗುವವರು ಮರೆಯದೇ ಗಮನಿಸಬೇಕು, ಏನದು ಇಲ್ಲಿದೆ ನೋಡಿ.
Kadalekayi Parishe
ಕಡಲೆಕಾಯಿ ಪರಿಷೆ (ಸಂಗ್ರಹ ಚಿತ್ರ)(ಗ್ಯಾಲರಿ– Vijaya Karnataka Web)
ಬೆಂಗಳೂರು: ಉದ್ಯಾನನಗರಿಯಾದ ಬೆಂಗಳೂರಿನಲ್ಲಿ ಈ ನವೆಂಬರ್‌ನಲ್ಲಿ ಪ್ರತಿ ವರ್ಷದಂತೆ ಎರಡು ಕಡಲೆಕಾಯಿ ಪರಿಷೆಗಳು ನಡೆಯಲಿವೆ. ಮೊದಲು ನಡೆಯಲಿರುವುದು ಮಲ್ಲೇಶ್ವರಂ ಕಡಲೆಕಾಯಿ ಪರಿಷೆ. ಅದು ನ. 8ರಿಂದ 10 ರವರೆಗೆ ನಡೆಯಲಿದೆ. ಇದಾದ ಬಳಿಕ, ಬಸವನಗುಡಿಯಲ್ಲಿ ನ. 17ರಿಂದ 21ರವರೆಗೆ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಎರಡೂ ಪರಿಷಗಳಿಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಹಾನಗರ ಪಾಲಿಕೆ ಹಾಗೂ ಪೊಲೀಸರು ಕೈಗೊಂಡಿದ್ದಾರೆ. ಈ ಬಾರಿ ಹಿಂದೆಂದೂ ಕಾಣದಷ್ಟು ಜನಜಂಗುಳಿಗ ಈ ಎರಡೂ ಪರಿಷೆಗಳು ಸಾಕ್ಷಿಯಾಗುವ ನಿರೀಕ್ಷೆಯಿದೆ.

ಮೊದಲು ನಡೆಯೋದು ಮಲ್ಲೇಶ್ವರ ಪರಿಷೆ

ಮಲ್ಲೇಶ್ವರಂನಲ್ಲಿರುವ ಐತಿಹಾಸಿಕ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಪ್ರತಿ ವರ್ಷ ಜರುಗುವ ಪರಿಷೆಯನ್ನೇ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಎಂದು ಕರೆಯುತ್ತಾರೆ. ನ. 8ರ ಸಂಜೆ 5 ಗಂಟೆಗೆ ಈ ಪರಿಷೆಯ ಉದ್ಘಾಟನೆಯಾಗುತ್ತದೆ. ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಪರಿಷೆಯನ್ನು ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಗೂ ಕನ್ನಡ ಸಿನಿರಂಗದ ಕೆಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಕಳೆದ ವರ್ಷದ ಬಸವನಗುಡಿ ಪರಿಷೆಯು ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿತ್ತು.

ಬಸನಗುಡಿ ಪರಿಷೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಮಲ್ಲೇಶ್ವರಂ ಪರಿಷೆ ಮುಗಿದ ವಾರದೊಳಗೆ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯು ನ. 17 ರಂದು ಆರಂಭವಾಗಿ 5 ದಿನಗಳ ಕಾಲ ನಡೆಯಲಿದೆ. ಇದೇ ಮೊದಲ ಬಾರಿಗೆ ಬಸವನಗುಡಿ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸಲಾಗಿದೆ. ನ. 17ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಕಳೆದ ವರ್ಷ ಸುಮಾರು 5 ಲಕ್ಷ ಜನರು ಪರಿಷೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಗಮನಿಸಬೇಕಾದ ಅಂಶ

ಈ ಬಾರಿಯ ಮಲ್ಲೇಶ್ವರಂ ಮತ್ತು ಬಸವನಗುಡಿ ಪರಿಷೆಗಳನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಗಿದೆ. ಹಾಗಾಗಿ, ಪರಿಷೆಗಳಿಗೆ ಬರುವವರು ಮನೆಗಳಿಂದಲೇ ಬಟ್ಟೆಯ ಹಾಗೂ ಇನ್ನಿತರ ಪರಿಸರಸ್ನೇಹಿ ಕೈ ಚೀಲಗಳನ್ನು ಕೊಂಡೊಯ್ಯಬೇಕಿದೆ. ಇಲ್ಲವೇ, ಪರಿಷೆಗಳಲ್ಲೇ ಸಿಗುವ ವಿವಿಧ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಖರೀದಿ ಮಾಡಿ ಅದರಲ್ಲಿ ಕಡಲೆಕಾಯಿ ಅಥವಾ ಕಡಲೆ ಆಧಾರಿತ ತಿನಿಸುಗಳನ್ನು ಖರೀದಿಸಿ ಮನೆಗೊಯ್ಯಬಹುದು. ಆದರೆ, ಪರಿಷೆಯಲ್ಲಿ ಸಿಗುವ ಪರಿಸರ ಸ್ನೇಹಿ ಬ್ಯಾಗುಗಳು ದುಬಾರಿ ಇರಬಹುದು. ಗ್ರಾಹಕರು ಈ ಬಗ್ಗೆ ಗಮನ ಹರಿಸಬೇಕು.

ಕ್ಯಾಮೆರಾ ಕಣ್ಣಲ್ಲಿ ಬಸವನಗುಡಿ ಕಡಲೆಕಾಯಿ ಪರಿಷೆ

ಪೂರ್ವ ಸಿದ್ಧತೆ

ಸುರಕ್ಷತೆಯ ದೃಷ್ಟಿಯಿಂದ ಪರಿಷೆಗಳು ನಡೆಯುವ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲಾಗುತ್ತಿದೆ. ಅಗ್ನಿಶಾಮಕ ವಾಹನ, ತುರ್ತು ಚಿಕಿತ್ಸಾ ವಾಹನ ಮತ್ತು ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತಿದೆ. ಮತ್ತೊಂದೆಡೆ, ನಾಗರಿಕ ಸೇವಾ ಇಲಾಖೆಗಳಿಂದ ಪರಿಷೆ ನಡೆಯುವ ಸ್ಥಳಗಳಲ್ಲಿ ನಿರಂತರ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಬೀದಿ ದೀಪಗಳನ್ನು ಅಳವಡಿಸಿ, ದುರಸ್ತಿ ಮಾಡಲಾಗಿದೆ. ಆರೋಗ್ಯ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಬಸವನಗುಡಿಯಲ್ಲೇ ಕಡಲೆಕಾಯಿ ಪರಿಷೆ ಏಕೆ?

ಪ್ರತಿ ವರ್ಷದಂತೆ ಈ ಬಾರಿಯೂ ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಈ ಪರಿಷೆಯನ್ನು ಆಯೋಜಿಸಲು ಇರುವ ಐತಿಹಾಸಿಕ ಕಾರಣವೇನು ಮತ್ತು ಈ ವಿಶಿಷ್ಟ ಕಡಲೆಕಾಯಿ ಪರಿಷೆಗೂ ಬಸವನಗುಡಿಯಲ್ಲಿರುವ ದೊಡ್ಡ ಬಸವನಿಗೂ ಇರುವ ಸಂಬಂಧವೇನು ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಇದೇನೆಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

ಚೇತನ್ ಓ.ಆರ್.

ಲೇಖಕರ ಬಗ್ಗೆಚೇತನ್ ಓ.ಆರ್.ಪ್ರಸ್ತುತ ‘ವಿಜಯ ಕರ್ನಾಟಕ’ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಇವರು, 2005ರಲ್ಲಿ ಬಿಎಸ್ಸಿ ಎಲೆಕ್ಟ್ರಾನಿಕ್ಸ್ ನಲ್ಲಿ ಪದವಿ (ಗುಲ್ಬರ್ಗಾ ವಿವಿ), 2007ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2023ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ.

ಪತ್ರಿಕೋದ್ಯಮದಲ್ಲಿನ ಸುಮಾರು 18 ವರ್ಷಗಳಿಗೂ ಮೇಲ್ಪಟ್ಟ ಅನುಭವದಲ್ಲಿ ಜಿಲ್ಲಾ ಸುದ್ದಿ, ದೇಶ-ವಿದೇಶ, ಕ್ರೀಡಾ ವಿಭಾಗ, ವಾಣಿಜ್ಯ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಸಿನಿಮಾ, ಟೆಕ್ನಾಲಜಿ, ಆರೋಗ್ಯ ವಿಭಾಗಗಳಿಗೆ ಲೇಖನಗಳನ್ನು ಬರೆದ ಅನುಭವವಿದೆ.

ಐಪಿಎಲ್ ವಿಶೇಷ ವರದಿಗಳಿಗಾಗಿ, ಟಿ20 ವಿಶ್ವಕಪ್ ಕವರೇಜ್ ಗಾಗಿ ಕನ್ನಡಪ್ರಭ ಮ್ಯಾನೇಜ್ಮೆಂಟ್ ನಿಂದ ಪ್ರಶಂಸಾಪತ್ರಗಳನ್ನು ಪಡೆದಿದ್ದು ಹಾಗೂ 2016ರಲ್ಲಿ ಕನ್ನಡಪ್ರಭದ ಮುಖಪುಟದಲ್ಲಿ ಪ್ರಕಟವಾಗಿದ್ದ ‘ಜಿಮ್ನಾಸ್ಟಿಕ್ಸ್ ನಲ್ಲಿ ಮುರುಟಿ ಹೋದ ಬದುಕು’ ಎಂಬ ಶೀರ್ಷಿಕೆಯ ವಿಶೇಷ ವರದಿಗಾಗಿ ಆಗಿನ ಮುಖ್ಯಮಂತ್ರಿಗಳ ಕಚೇರಿಯಿಂದ ಅಭಿನಂದನಾ ಪತ್ರ ಪಡೆದಿದ್ದು, ಅದುವರೆಗಿನ ವಿಶೇಷ ವರದಿಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಎಸ್.ಎ.ಐ ಸಂಸ್ಥೆಯಿಂದ ಸನ್ಮಾನಿತರಾಗಿದ್ದು ಈವರೆಗಿನ ವೃತ್ತಿಜೀವನದ ಅವಿಸ್ಮರಣೀಯ ನೆನಪುಗಳು.

ಸಾಹಿತ್ಯ, ಫೋಟೋಗ್ರಾಫಿ, ಸಿನಿಮಾ, ಗ್ರಾಫಿಕ್ಸ್ – ಇವು ಇವರ ಆಸಕ್ತಿದಾಯಕ ವಿಷಯಗಳು. ಖ್ಯಾತ ಕ್ಯಾಮೆರಾ ಸಂಸ್ಥೆಯಾದ ‘ನಿಕಾನ್’ ವತಿಯಿಂದ ಕ್ರೀಡಾ ವರದಿಗಾರಿಕೆಗಾಗಿ ಪ್ರಮಾಣಪತ್ರ ಪಡೆದಿದ್ದಾರೆ. ‘ಮಾಯಾ ಅನಿಮೇಷನ್ಸ್’ ಸಂಸ್ಥೆಯಿಂದ ಬೇಸಿಕ್ ಗ್ರಾಫಿಕ್ಸ್ ತರಬೇತಿ ಪಡೆದಿದ್ದಾರೆ.

ಪತ್ರಿಕಾ ವೃತ್ತಿಯ ನಡುವೆಯೇ, ಬದಲಾದ ಕಾಲಘಟ್ಟಗಳಲ್ಲಿ ಮಾಧ್ಯಮ ಕ್ಷೇತ್ರವು ಎದುರಿಸುವ ಸವಾಲುಗಳನ್ನು ಗಮನಿಸಿ ಕೆಲವು ಸಂಶೋಧನಾ ವರದಿಗಳನ್ನು ಬರೆದಿದ್ದು, ಅವು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (U.G.C) ಮಾನ್ಯತೆಯುಳ್ಳ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಜರ್ನಲ್ ಗಳಲ್ಲಿ 2022ಕ್ಕೂ ಮುನ್ನ ಪ್ರಕಟವಾಗಿವೆ.… ಇನ್ನಷ್ಟು ಓದಿ